ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಸುದ್ದಿಗಳು News

Posted by vidyamaana on 2023-11-07 04:42:13 |

Share: | | | | |


ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ತಡರಾತ್ರಿ ಬರ್ಬರ ಹತ್ಯೆ

ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.


ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

 Share: | | | | |


ಕರ್ನಾಟಕ ಸೇರಿ ದೇಶದ ಹಲವು ರಾಜ್ಯಗಳಲ್ಲಿ 40 ಡಿಗ್ರಿ ದಾಟಿದ ತಾಪಮಾನ, ಬಿಸಿಗಾಳಿ ಎಚ್ಚರಿಕೆ!

Posted by Vidyamaana on 2024-03-28 19:52:11 |

Share: | | | | |


ಕರ್ನಾಟಕ  ಸೇರಿ ದೇಶದ ಹಲವು ರಾಜ್ಯಗಳಲ್ಲಿ 40 ಡಿಗ್ರಿ ದಾಟಿದ ತಾಪಮಾನ, ಬಿಸಿಗಾಳಿ ಎಚ್ಚರಿಕೆ!

ನವದೆಹಲಿ: ದೇಶದ ಅನೇಕ ರಾಜ್ಯಗಳಲ್ಲಿ, ಮಾರ್ಚ್ ತಿಂಗಳಲ್ಲಿಯೇ ತೀವ್ರ ಶಾಖದ ಹೆಚ್ಚುತ್ತಿದೆ. ಈ ನಡುವೆ ಮಾರ್ಚ್ನಲ್ಲಿ ಇಂತಹ ಶಾಖವನ್ನು ಗಮನದಲ್ಲಿಟ್ಟುಕೊಂಡು, ಜೂನ್ ವೇಳೆಗೆ, ದೇಶದ ಅನೇಕ ರಾಜ್ಯಗಳಲ್ಲಿ ಸುಡುವ ಶಾಖ ಇರಬಹುದು ಎನ್ನಲಾಗಿದೆ.

ಪುರುಷರಕಟ್ಟೆ :ಉದಯಭಾಗ್ಯ ಹೋಟೆಲ್ ಮಾಲಕ ಸುರೇಶ್ ಪ್ರಭು ನಿಧನ

Posted by Vidyamaana on 2023-10-01 09:35:46 |

Share: | | | | |


ಪುರುಷರಕಟ್ಟೆ :ಉದಯಭಾಗ್ಯ ಹೋಟೆಲ್ ಮಾಲಕ ಸುರೇಶ್ ಪ್ರಭು   ನಿಧನ

ಉದಯಭಾಗ್ಯ ಹೋಟಲ್ ಮಾಲಕ ಸುರೇಶ್ ಪ್ರಭು ನಿಧನ


ಪುತ್ತೂರು: ಇಲ್ಲಿನ ಪುರುಷರಕಟ್ಟೆ ಉದಯಭಾಗ್ಯ ಹೊಟೇಲ್ ಮಾಲಕ ಸುರೇಶ್ ಪ್ರಭು (72) ಅವರು ಹೃದಯಾಘಾತದಿಂದ ಇಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನ ಹೊಂದಿದರು.

ಪುತ್ತೂರಿನ ಹೊಟೇಲ್ ಉದ್ಯಮಗಳ ಪೈಕಿ ಉದಯಭಾಗ್ಯ ಹೋಟೆಲ್ ಕೂಡ ಒಂದು. ಸುರೇಶ್ ಪ್ರಭು ಉದ್ಯಮದ ಜೊತೆಗೆ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದರು.

ಪತ್ನಿ, ಒಂದು ಗಂಡು ಹಾಗೂ ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

ಟೈಟ್ ಆಗಿ ಮರ್ಮಾಂಗವನ್ನೇ ಕತ್ತರಿಸಿಕೊಂಡ ರಾಜ ಶೆಟ್ಟಿ

Posted by Vidyamaana on 2023-04-09 16:04:30 |

Share: | | | | |


ಟೈಟ್ ಆಗಿ ಮರ್ಮಾಂಗವನ್ನೇ ಕತ್ತರಿಸಿಕೊಂಡ ರಾಜ ಶೆಟ್ಟಿ

ಮೈಸೂರು, ಕುಡಿದ ಮತ್ತಿನಲ್ಲಿ ಮೈಸೂರಿನ ಹುಣಸೂರಿನಲ್ಲಿ ವ್ಯಕ್ತಿಯೊಬ್ಬ ಹುಚ್ಚಾಟ ಮೆರೆದಿದ್ದಾನೆ. ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡು ಪೇಚೆಗೆ ಸಿಲುಕಿದ ಘಟನೆ ನಡೆದಿದೆ.ಹುಣಸೂರಿನ ತೊಂಡಾಳು ಗ್ರಾಮದಲ್ಲಿ ರಾಜಶೆಟ್ಟಿ ಎಂಬಾತ ಕುಡಿದ ಮತ್ತಿನಲ್ಲಿ ತನ್ನ ಮರ್ಮಾಂಗವನ್ನು ಕತ್ತರಿಸಿದ್ದಾನೆ.

ಕುಡಿದ ಮತ್ತಿನಲ್ಲಿ ರಾಜಶೆಟ್ಟಿ ಶುಕ್ರವಾರ ತಡ ರಾತ್ರಿ ಮದ್ಯದ ನಶೆಯಲ್ಲಿ ತೂರಾಡುತ್ತಾ ಮನೆ ಕಡೆ ಹೋಗುವಾಗ ಕೆಲವರು ಬೈದಿದ್ದಾರೆ.ಇದರಿಂದ ಮನೆಯೊಂದರ ಬಳಿ ಇಟ್ಟಿದ್ದ ಕುಡುಗೋಲಿನಿಂದ ಏಕಾಏಕಿ ಮರ್ಮಾಂಗ ಕತ್ತರಿಸಿಕೊಂಡಿದ್ದಾನೆ.ಬಳಿಕ ನೋವಿನಿಂದ ಚೀರಾಡಿದ್ದಾನೆ.ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಇಂದಿನ ಪ್ರಚಾರ ಸಭೆಗಳು

Posted by Vidyamaana on 2023-04-26 03:18:31 |

Share: | | | | |


ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಇಂದಿನ ಪ್ರಚಾರ ಸಭೆಗಳು

ಪುತ್ತೂರು: ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರ ಚುನಾವಣಾ ಪ್ರಚಾರ ಕಾರ್ಯ ಬಿರುಸಿನಿಂದ ಸಾಗುತ್ತಿದ್ದು, ಗ್ರಾಮಾಂತರ ಭಾಗಗಳಲ್ಲಿ ಪ್ರಚಾರ ಸಭೆಗಳನ್ನು ಆಯೋಜಿಸಲಾಗುತ್ತಿದೆ.

ಅಶೋಕ್ ಕುಮಾರ್ ರೈ ಅವರ ಇಂದಿನ ಪ್ರಚಾರ ಸಭೆಗಳು ಹೀಗಿವೆ -

ಬೆಳಿಗ್ಗೆ 9.30ಕ್ಕೆ ಅರಿಯಡ್ಕ, 10.30ಕ್ಕೆ ಮಾಡ್ನೂರು, 11.30ಕ್ಕೆ ಕೊಳ್ತಿಗೆ, ಮಧ್ಯಾಹ್ನ 2.30ಕ್ಕೆ ನೆಟ್ಟಣಿಗೆ ಮುಡ್ನೂರು, 3.30ಕ್ಕೆ ಪಡುವನ್ನೂರು, 4.30ಕ್ಕೆ ಬಡಗನ್ನೂರು, ಸಂಜೆ 6ಕ್ಕೆ ಬೆಟ್ಟಂಪಾಡಿ, 7 ಗಂಟೆಗೆ ನಗರದಲ್ಲಿ ಪ್ರಚಾರ ಸಭೆಗಳು ನಡೆಯಲಿವೆ ಎಂದು ತಿಳಿದುಬಂದಿದೆ.

ನಿಡ್ಪಳ್ಳಿ: ಕಾಂಗ್ರೆಸ್ ಚುನಾವಣಾ ಪ್ರಚಾರಸಭೆ

Posted by Vidyamaana on 2023-04-28 10:06:32 |

Share: | | | | |


ನಿಡ್ಪಳ್ಳಿ: ಕಾಂಗ್ರೆಸ್ ಚುನಾವಣಾ ಪ್ರಚಾರಸಭೆ

ಪುತ್ತೂರು:ಚುನಾವಣೆಯ ಖರ್ಚಿಗೆಂದು ನಾನು ಯಾವುದೇ ಉದ್ಯಮಿಗಳಿಂದ ಹಣ ಪಡೆದುಕೊಂಡಿಲ್ಲ ಮತ್ತು ಯಾರಿಂದಲೂ ಹಣ ಪಡೆದುಕೊಳ್ಳುವುದೂ ಇಲ್ಲ ,‌ತನ್ನ ದುಡಿಮೆಯ ಹಣದಿಂದಲೇ ನಾನು ಚುನಾವಣೆ ಖರ್ಚು ,ವೆಚ್ಚಗಳನ್ನು ನಿಭಾಯಿಸಲಿದ್ದೇನೆ ಎಂದು ಪುತ್ತೂರು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಹೇಳಿದರು.

ಮತ ಕೇಳಲು ಗ್ರಾಮಗಳಿಗೆ ಭೇಟಿ‌ನೀಡುವ ವೇಳೆ ರಾಜಕೀಯ ಪಕ್ಷದವರು ಚುನಾವಣೆ ಖರ್ಚಿಗೆಂದು ಹಣ ಕೊಡುವಂತೆ ಬಲವಂತ ಮಾಡುತ್ತಿದ್ದಾರೆ ಎಂಬ ವಿಷಯ ತಿಳಿದಿದೆ. ಮತ ಕೇಳಲು ಮನೆಗಳಿಗೆ ತೆರಳಿದಾಗಲೂ ಮನೆಯ ಯಜಮಾನ ಮನೆಯೊಳಗಿದ್ದರೂ ಅವರಿಲ್ಲ ಎಂದು ಹೇಳುವ ಸ್ಥಿತಿ ಯನ್ನು ಕೆಲವರು ನಿರ್ಮಿಸಿದ್ದಾರೆ. ನಾನು ಯಾರಲ್ಲೂ ದುಡ್ಡು ಕೇಳುವುದಿಲ್ಲ ಮತ್ತು ನನ್ನ ಹೆಸರು ಹೇಳಿ ಯಾರಾದರು ಹಣ ಕೇಳಿದರೆ ಅವರಿಗೂ ಕೊಡಬೇಡಿ ಎಂದು‌ ಮನವಿ ಮಾಡಿದರು.  ನಾನು ಚಿನಾವಣೆಗೆ ನಿಂತು ಇನ್ನೊಬ್ಬರಿಗೆ ಯಾಕೆ ತೊಂದರೆ ಕೊಡುವುದು ಸರಿಯಲ್ಲ ಎಂಬಪರಿಜ್ಞಾನ ಪ್ರತೀಯೊಬ್ಬ ಅಭ್ಯರ್ಥಿಯಲ್ಲೂ ಇರಬೇಕಿದಸ. ಸ್ವಂತ ಹಣವನ್ನೇ ಚುನಾವಣೆಗೆ ಖರ್ಚು‌ಮಾಡಬೇಕೇ ವಿನ ಯಾರಿಗೂತೊಂದರೆ ಕೊಡಬಾರದು ಎಂದು ಹೇಳಿದರು.

ನಿಡ್ಪಳ್ಳಿ ಗ್ರಾಮದಲ್ಲಿ‌ನಮ್ಮ‌ಟ್ರಸ್ಟ್ ನ ಅನೇಕ‌ಫಲಾನುಭವಿಗಳಿದ್ದಾರೆ.‌ಈ ಭಾಗದ ಅನೇಕ ಜನರಿಗೆ ತನ್ನಿಂದಾದ ನೆರವು‌ಮಾಡಿದ್ದೇನೆ 

ನನ್ನ ಸೇವೆಯನ್ನು ಜನ‌ಮರೆತಿಲ್ಲ ಎಂಬುದನ್ನು ಸಭೆಯಲ್ಲಿ ಸೇರಿದ ಜನ‌ಸಮೂಹವೇ‌ ಸಕ್ಷಿಯಾಗಿದೆ ಎಂದು‌ಹೇಳಿದರುಪುತ್ತೂರು ಅಭಿವೃದ್ದಿಯಾಗಬೇಕಾದರೆ ಇಲ್ಲಿ ಕಾಂಗ್ರೆಸ್ ಶಾಸಕರಾಗಬೇಕು. ಕಳೆದ ಅನೇಕ ವರ್ಷಗಳಿಂದ ಇಲ್ಲಿ ನಮ್ಮ ಶಾಸಕರಿಲ್ಲದ ಕಾರಣ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜನ ಸಾಮಾನ್ಯರಿಗೆ ತೀವ್ರ ತೊಂದರೆಯಾಗಿದ್ದು ಈ ಬಾರು ಕಾಂಗ್ರೆಸ್ ಅಭ್ಯರ್ಥಿಯನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದರ.‌ಭೃಷ್ಟಾಚಾರವಿಲ್ಲದ, ಬಡವರ ಸ್ನೇಹಿ ಆಡಳಿತ ನಡೆಸಲು ಪ್ರತೀಯೊಬ್ಬರೂ‌ಆಶೀರ್ವದ ಮಾಡಬೇಕು‌ಎಂದು ಹೇಳಿದರು.ಸರಕಾರಿ ಶಾಲೆಗಳಲ್ಲಿ ನಮ್ಮ‌ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತಾಗಬೇಕು.‌ ಸರಕಾರಿ‌ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ಮೊದಲು ಪರಿಹರಿಸಬೇಕಿದೆ.‌ಶಾಸಕರಾಗಿ ಆಯ್ಕೆಯಾದಲ್ಲಿ ಎಲ್ಲಾ ಸರಕಾರಿ‌ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶ್ರಮವಹಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ‌ಸಂಯೋಜಕ ಕಾವು ಹೇಮನಾಥ‌ಶೆಟ್ಟಿ, ಶಿವಪ್ಪ ಪೂಜಾರಿ‌ನಿಡ್ಪಳ್ಳಿ, ಎಂ‌ಎಸ್‌ಮಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.

ಕಲಾವಿದರ ಬಳಿ ಕಮಿಷನ್ | ನನ್ನ ಬಳಿ ಯಾವ ಅಧಿಕಾರಿಯೂ ಬಂದಿಲ್ಲ: ರಾಜೀವ ತಾರಾನಾಥ ಸ್ಪಷ್ಟನೆ

Posted by Vidyamaana on 2023-10-14 16:43:53 |

Share: | | | | |


ಕಲಾವಿದರ ಬಳಿ ಕಮಿಷನ್ | ನನ್ನ ಬಳಿ ಯಾವ ಅಧಿಕಾರಿಯೂ ಬಂದಿಲ್ಲ: ರಾಜೀವ ತಾರಾನಾಥ ಸ್ಪಷ್ಟನೆ

ಬೆಂಗಳೂರು: ‘ಯಾವ ಅಧಿಕಾರಿಯೂ ನನ್ನ ಬಳಿ ಬಂದಿಲ್ಲ’ ಎಂದು ಸರೋದ್ ವಾದಕ ಪಂ. ರಾಜೀವ ತಾರಾನಾಥ್ ಸ್ಪಷ್ಟನೆ ನೀಡಿದ್ದಾರೆ.



ದಸರಾ ಕಾರ್ಯಕ್ರಮದಲ್ಲಿ ಅವಕಾಶ ಒದಗಿಸಿ, ಹಣ ಬಿಡುಗಡೆ ಮಾಡಿಸಲು ಅಧಿಕಾರಿಗಳು ಕಮಿಷನ್ ಕೇಳಿದ ಆರೋಪ ಕುರಿತಂತೆ ಸ್ಪಷ್ಟನೆ ನೀಡಿರುವ ಸರೋದ್ ವಾದಕ ಪಂ. ರಾಜೀವ ತಾರಾನಾಥ್ ಅವರು, ‘ಯಾವ ಅಧಿಕಾರಿಯೂ ನನ್ನ ಬಳಿ ಬಂದಿಲ್ಲ’ ಎಂದು ವಿವಾದಕ್ಕೆ ತೆರೆ ಎಳೆದಿದ್ದಾರೆ.



ಶನಿವಾರ ತಮ್ಮ ಮನೆಗೆ ಭೇಟಿ ನೀಡಿದ ಅಧಿಕಾರಿಗಳೊಂದಿಗೆ ಮಾತನಾಡಿದ ಪಂ. ತಾರಾನಾಥ ಅವರು, ‘ನನ್ನ ಬಳಿ ಯಾವ ಅಧಿಕಾರಿಯೂ ಬಂದಿಲ್ಲ. ಅದೊಂದು ತಪ್ಪು ಹೇಳಿಕೆ. ಸಮಿತಿ ಕಡೆಯಿಂದಲೂ ಯಾರೂ ಬಂದಿಲ್ಲ’ ಎಂದಿದ್ದಾರೆ.



ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಹಿಂದೆ ಜಿಲ್ಲಾಡಳಿತ ಕೋರಿತ್ತು. ಆರೋಗ್ಯ ಸಮಸ್ಯೆಯಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಈಗ ನಿಮ್ಮ ಆರೋಗ್ಯ ಉತ್ತಮವಾಗಿದ್ದು, ಕಾರ್ಯಕ್ರಮ ನೀಡುತ್ತೀರಾ ಎಂಬ ಅಧಿಕಾರಿಗಳ ಕೋರಿಕೆಗೆ ಸಮ್ಮತಿಸಿದ ಪಂ. ತಾರಾನಾಥ, ‘ಬಂದು ಡಾನ್ಸ್ ಮಾಡುತ್ತೇನೆ’ ಎಂದು ಹೇಳಿದ್ದಾರೆ.



Leave a Comment: