ಸಾವಿನಲ್ಲಿಯೂ ಘನತೆ ಇರಲಿ ಎಂಬ ಹೋರಾಟ ಹಲವಾರು ದಶಕಗಳಿಂದ ವಿದೇಶ ವಿದೇಶಗಳಲ್ಲಿ ನಡೆಯುತ್ತಿದೆ. ಇದಕ್ಕೆ ದಯಾಮರಣ, ಇಚ್ಚಾಮರಣ (ichchamaran) ಹೀಗೆ ಹತ್ತಾರು ಹೆಸರುಗಳಿಂದ ಕರೆಯುತ್ತಾರೆ. ಇನ್ನೇನು ಗುಣ ಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿರುವ ಕೊನೆಗಾಲದಲ್ಲಿ ಹಿಂಸೆ ಅನುಭವಿಸುತ್ತಿರುವರ ಘಟನೆಯಿಂದ ಸಾವನ್ನಪ್ಪಬಹುದು ಎಂದು ಸುಪ್ರೀಂ ಕೋರ್ಟ 2023 ರಲ್ಲಿ ಒಂದು ತೀರ್ಪು ನೀಡಿದೆ.

ಸುಪ್ರೀಂ ಕೋರ್ಟನ ತೀರ್ಪನ್ನ ರಾಜ್ಯ ಆರೋಗ್ಯ ಇಲಾಖೆ ಅನುಷ್ಠಾನಕ್ಕೆ ಮುಂದಾಗಿದೆ. ಮನುಷ್ಯ ಜೀವನಕ್ಕೆ ಗೌರವಕೊಟ್ಟು ಸುರ್ಪೀಂ ತೀರ್ಪು ಜಾರಿ ಮಾಡಬೇಕಿದೆ.

ದಯಾಮರಣದ ಹಕ್ಕು ಜಾರಿಗೆ ಮುಂದಾದ ರಾಜ್ಯ ಆರೋಗ್ಯ ಇಲಾಖೆ

ಕಳೆದ 2023 ಜನವರಿ 30 ರಂದು ಸುಪ್ರೀಂ ಕೋರ್ಟ ಒಂದು ಐತಿಹಾಸಿಕ ತೀರ್ಪು ನೀಡಿದೆ. ಅಂದರೆ ಸಂವಿಧಾನದ 21ನೇ ವಿಧಿಯು ಘನತೆಯಿಂದ ಬದುಕುವ ಹಾಗೂ ಸಾಯುವಕ ಹಕ್ಕು ಒದಗಿಸಿದೆ. ಇದೇ ವಿಚಾರ ಇಟ್ಟುಕೊಂಡು ಸುಪ್ರೀಂ ಕೋರ್ಟ್ ಮಾರಣಾಂತಿಕ ರೋಗಗಳಿಂದ ಬಳಲುವರಿಗೆ ದಯಾಮರಣದ ಹಕ್ಕು ನೀಡಿದೆ. ಹೀಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಜಾರಿಗೆ ತರಲು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದೆ.

ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾ ಅವರು ಇದೇ ಜನವರಿ 24, 2025 ರಂದು ಆದೇಶ ಹೊರಡಿಸಿದ್ದು. ಸುಪ್ರೀಂ ತೀರ್ಪಿನ ಅನ್ವಯ ಘತನೆಯ ಸಾವನ್ನಪ್ಪಬಹುದು ಎಂಬುದು ಆದೇಶದ ಸಾರಾಂಶ. ಹೀಗೆ ದಯಾಮರಣ ಹೊಂದುವಾಗ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳ ಪಾಲನೆ ಮಾಡಬೇಕಾಗುತ್ತದೆ.

ನಿಮಯ ಒಂದು- ಚಿಕಿತ್ಸೆ ನೀಡುತ್ತಿರುವ ವೈದ್ಯರ ಅನುಮತ. ನಿಯಮ ಎರಡು- ರೋಗಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ಪ್ರಾಥಮಿಕ ಮತ್ತು ಮಾಧ್ಯಮಿಕ ವೈದ್ಯಕೀಯ ಮಂಡಳಿ ಸ್ಥಾಪನೆ. ನಿಯಮ ಮೂರು- ವೈದ್ಯಕೀಯ ಮಂಡಳಿಯಲ್ಲಿ ಮೂರು ಜನ ವೈದ್ಯರುತ್ತಾರೆ. ನಿಯಮ ನಾಲ್ಕು- ಈ ವೈದ್ಯಕೀಯ ಮಂಡಳಿ ದಯಾ ಮರಣದ ಬಗ್ಗೆ ತೆಗೆದುಕೊಂಡ ನಿರ್ಧಾರ ಪ್ರತಿಯನ್ನ ಸ್ಥಳೀಯ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಜೆಎಂಎಫ್ ಸಿ ನ್ಯಾಯಾಲಯ ಈ ಪ್ರತಿ ಹೈಕೋರ್ಟಗೆ ಕಳುಹಿಸುತ್ತದೆ. ಮರಣ ಇಚ್ಚೆಯ ಉಯಿಲು ಪಡೆಯಬೇಕು. ರೋಗಿಯು ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಕಳೆದು ಕೊಂಡಾಗ ಅವರ ಪರವಾಗಿ ಕನಿಷ್ಠ ಇಬ್ಬರು ನಾಮನಿರ್ದೇಶನ ಮಾಡಬೇಕೆಂಬು ಸುಪ್ರೀಂ ತಾಕೀತು.

ಇಚ್ಛಾಮರಣ ಪಡೆದ ಮೊದಲ ವ್ಯಕ್ತಿ ನಾನಾಗಬೇಕು: ಎಚ್‌.ಬಿ.ಕರಿಬಸಮ್ಮ

ದಾವಣಗೆರೆಯಲ್ಲಿ  ನಿವೃತ್ತ ಶಿಕ್ಷಕಿ ಹೆಚ್‌.ಬಿ.ಕರಿಬಸಮ್ಮ ಹೇಳಿಕೆ ನೀಡಿದ್ದು, ನನ್ನ 24 ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಘನತೆಯಿಂದ ಮರಣಹೊಂದುವ ಕಾನೂನು ಜಾರಿಯಿಂದ ಸಂತಸವಾಗಿದೆ. ಕಾನೂನಾತ್ಮಕವಾಗಿ ಇಚ್ಛಾಮರಣ ಪಡೆದ ಮೊದಲ ವ್ಯಕ್ತಿ ನಾನಾಗಬೇಕು ಎಂಬ ಬಯಕೆ ಇದೆ. ಈ ಅವಕಾಶಕ್ಕೆ ಕಾಯುತ್ತಿದ್ದೇನೆ ಎಂಬುದ ಕರಿಬಸಪ್ಪ ಅವರ ಮಾತಾಗಿದೆ.

ಈ ಕಾನೂನಿನಡಿ ಮೊದಲು ನಾನೇ ದಯಾಮರಣ ಪಡೆಯಬೇಕು. ಹತ್ತಾರು ಕಾಯಿಲೆಗಳಿಂದ ನಾನು ಹಿಂಸೆ ಅನುಭವಿಸುತ್ತಿದ್ದೇನೆ. ಬಾಲ್ಯದಲ್ಲಿ ಕುಷ್ಠರೋಗ ಇರುವ ವ್ಯಕ್ತಿಗೆ ಕೊಟ್ಟು ಮದ್ವೆ ಮಾಡಿದ್ದರು. ಆತ ರೋಗದಿಂದ ಮೃತಪಟ್ಟಿದ್ದ, ಬಳಿಕ ವಿಧವಾ ವಿವಾಹವಾಗಿದ್ದೆ ಎಂದಿದ್ದಾರೆ.

ಜವಾನರ ಕಲ್ಯಾಣ ನಿಧಿಗೆ 10 ಲಕ್ಷ ರೂ

2ನೇ ಪತಿಯೂ ಬಿಟ್ಟು ಹೋದ, ಇದೇ ಕಾರಣಕ್ಕೆ 24 ವರ್ಷ ಹೋರಾಟ ಮಾಡಿದ್ದು, ಈಗ ನನಗೆ 84 ವರ್ಷ ವಯಸ್ಸು, ನನಗೆ ಗೌರವದ ಸಾವು ಬೇಕು. ಇದ್ದ ಮನೆ ಮಾರಾಟ ಮಾಡಿ 16 ವರ್ಷಗಳಿಂದ ವೃದ್ಧಾಶ್ರಮದಲ್ಲಿ ಇರುವೆ. ಗುಣಪಡಿಸಲಾಗದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಘನತೆಯಿಂದ ಮರಣಹೊಂದುವ ಹಕ್ಕು ನೀಡಿದ್ದು ಸ್ವಾಗತಾರ್ಹ. ನಾನು 24 ವರ್ಷಗಳಿಂದ ಕರಳು ಕ್ಯಾನ್ಸರ್‌ನಿಂದ ಬಳಲುತ್ತಿರುವೆ. ದಯಾಮರಣಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದೆ. ಹತ್ತಾರು ಸಲ ಸಾವಿನ ಮನೆಗೆ ಹೋಗಿ ವಾಪಸ್‌ ಬಂದಿರುವೆ. ಆತ್ಮಹತ್ಯೆ ಮಾಡಿಕೊಳ್ಳಲು ಮನಸ್ಸು ಒಪ್ಪಿಲ್ಲ. ಮಾರಣಾಂತಿಕ ಕಾಯಿಲೆಗಳಿಂದ ಬಳಲ್ತಿರುವ ವೃದ್ಧರ ಸಂಖ್ಯೆ ಹೆಚ್ಚಾಗಿದೆ‌. ಘನತೆಯಿಂದ ಮರಣಹೊಂದುವ ಅವಕಾಶ ಇಲ್ಲದೇ ನರಳುತ್ತಿದ್ದಾರೆ. ಮನೆ ಮಾರಿ ಬ್ಯಾಂಕ್‌ನಲ್ಲಿಟ್ಟಿದ್ದ ಹಣ 10 ಲಕ್ಷ ರೂಪಾಯಿ ಆಗಿದೆ. ಈ ಹಣ ಗಡಿಭದ್ರತಾ ಪಡೆಯ ಜವಾನರ ಕಲ್ಯಾಣ ನಿಧಿಗೆ ನೀಡುವೆ ಎಂದಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!