ಪುತ್ತೂರು, ಅ.12: ಪುತ್ತೂರಿನಲ್ಲಿ ಹೆಚ್ಚೇನು ದಾಳಿಗೆ ಒಳಗಾಗಿ ಎರಡನೇ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ.

ವಿಟ್ಲ ಪಡೂರಿನ ಕೂಟೇಲು ನಿವಾಸಿ ಕಿರಣ್ ಅವರ ಪುತ್ರಿ ಜಿಶಾ (7) ಮೃತ ಬಾಲಕಿ. ಜಿಶಾ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಎರಡನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದರು.

ಅ.10ರಂದು ಸಂಜೆ ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ, 5ನೇ ತರಗತಿಯಲ್ಲಿ ಓದುತ್ತಿರುವ ಕಿರಣ್ ಅವರ ಸೋದರನ ಪುತ್ರ ಪ್ರತ್ಯುಷ್ (10) ಅವರೊಂದಿಗೆ ಮನೆ ಬಳಿಗೆ ಬಂದ ವೇಳೆ ಹೆಚ್ಚೇನು ದಾಳಿ ನಡೆಸಿದೆ. ಮಕ್ಕಳು ಬೊಗಳಾಡುತ್ತಿದ್ದ ಶಬ್ದ ಕೇಳಿ ಸ್ಥಳೀಯರು ರಕ್ಷಣೆಗೆ ಧಾವಿಸಿದಾಗ, ಅವರಿಗೆ ಸಹ ನೊಣದ ದಾಳಿ ಸಂಭವಿಸಿದೆ.

ಅಲ್ಲಿನ ನಾರಾಯಣ ಎಂಬವರು ಸೇರಿ ಮಕ್ಕಳನ್ನು ತಕ್ಷಣ ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಸ್ಥಿತಿ ಗಂಭೀರವಾಗಿದ್ದ ಜಿಶಾಳನ್ನು ಮಂಗಳೂರಿನ ಆಸ್ಪತ್ರೆಗೆ ತರಲಾಗಿತ್ತು. ಆದರೆ ಅ.11ರ ಸಂಜೆ ಚಿಕಿತ್ಸೆ ಫಲಿಸದೆ ಜಿಶಾ ಮೃತಪಟ್ಟರು.

ಜಿಶಾ ಏಕೈಕ ಪುತ್ರಿಯಾಗಿದ್ದು, ಆಕೆಯ ಸಾವಿನಿಂದ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಪ್ರತ್ಯುಷ್ ಗಂಭೀರ ಗಾಯಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾರಾಯಣ ಅವರಿಗೂ ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!