ಪುತ್ತೂರು ತಾಲೂಕು ಚಿಕ್ಕಮುಡೂರು ಗ್ರಾಮದ ಕೋಟೆಚ್ಯಾ ಕ್ರಾಸ್ ಸಮೀಪದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಝಿಂದಗಿ ಚಿಕನ್ ಸೆಂಟರ್’ ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ರಹಸ್ಯವಾಗಿ ಕಾಣೆಯಾದ ಘಟನೆ ನ.29ರಂದು ದಾಖಲಾಗಿದೆ.

ಕಾಣೆಯಾದ ಯುವಕ ಬದ್ರುದ್ದೀನ್ ಡಿಕೆ (25), ಸುಮಾರು 8 ವರ್ಷಗಳಿಂದ ಅಬ್ದುಲ್ ರಹಿಮಾನ್ ಮಾಲಿಕತ್ವದ ಉಕ್ತ ಚಿಕನ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದನು. ದಿನಾಂಕ 29-11-2025 ರಂದು ಎಂದಿನಂತೆ ಬೆಳಗ್ಗೆ 8.45ಕ್ಕೆ ಕೆಲಸಕ್ಕೆ ಹಾಜರಾಗಿದ್ದನು. ಬಳಿಕ “ಅಲಿಯಿಂದ ಮನೆಗೆ ಹೋಗಿ ವ್ಯವಹಾರದ ಹಣ ತೆಗೆದುಕೊಂಡು ಬರುತ್ತೇನೆ” ಎಂದು ಮಾಲಿಕರಿಗೆ ತಿಳಿಸಿ ಅಂಗಡಿಯಿಂದ ಹೊರಟಿದ್ದಾನೆ.

ಆದರೆ ನಂತರ ಅವನು ವಾಪಸ್ಸು ಕೆಲಸದ ಸ್ಥಳಕ್ಕೆ ಮರಳದೇ ಹೋದ ಕಾರಣದಿಂದಾಗಿ ಚಿಕನ್ ಸೆಂಟರ್ ಮಾಲಿಕರು ಬೆಳಗ್ಗೆ 11.00 ಗಂಟೆ ಸುಮಾರಿಗೆ ಪಿರ್ಯಾದಿದಾರರಿಗೆ ವಿಷಯ ತಿಳಿಸಿದ್ದಾರೆ.

ಪಿರ್ಯಾದಿದಾರರು ತಮ್ಮ ತಮ್ಮನಿಗೆ ಹಲವಾರು ಬಾರಿ ಕರೆ ಮಾಡಿದರೂ ಬದ್ರುದ್ದೀನ್ ಕರೆ ಸ್ವೀಕರಿಸದೇ, ನಂತರ 12.00 ಗಂಟೆಯಿಂದ ಮೊಬೈಲ್ ಸ್ವಿಚ್ ಆಫ್ ಆಗಿದೆ. ಸಂಬಂಧಿಕರು, ಸ್ನೇಹಿತರು ಹಾಗೂ ಪರಿಚಿತರ ಮನೆಗಳಲ್ಲಿ ವಿಚಾರಿಸಿದರೂ ಯಾವುದೇ ಸುಳಿವು ಲಭ್ಯವಾಗಿಲ್ಲ.

ಬದ್ರುದ್ದೀನ್ ಕೆಲಸದ ಸ್ಥಳಕ್ಕೂ ಹೋಗದೇ, ಮನೆಗೂ ಬಾರದೇ, ಯಾರ ಮನೆಗಳಲ್ಲೂ ದರ್ಶನವಾಗದೇ ಪೂರ್ಣವಾಗಿ ಕಾಣೆಯಾಗಿರುವುದರಿಂದ, ಪಿರ್ಯಾದಿದಾರರು ಪೊಲೀಸರು ತನಿಖೆ ನಡೆಸಿ ಕಾಣೆಯಾದ ಯುವಕನನ್ನು ಪತ್ತೆ ಹಚ್ಚುವಂತೆ ದೂರು ನೀಡಿದ್ದಾರೆ.

ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆಯುತ್ತಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!