ಪುತ್ತೂರು: ನಗರದ ಮಹಾವೀರ್ ಮಾಲ್‌ನಲ್ಲಿ ನೂತನವಾಗಿ ಆರಂಭಗೊಳ್ಳಲಿರುವ ‘ವಿಶ್ವರಂಜಿನಿ’ ಶುದ್ಧ ಸಸ್ಯಾಹಾರಿ ರೆಸ್ಟೋರೆಂಟ್‌ನ ಶುಭಾರಂಭ ಸಮಾರಂಭ ಆ.27ರಂದು ಬೆಳಗ್ಗೆ 9 ಗಂಟೆಗೆ ನಡೆಯಲಿದೆ.ಮಹಾವೀರ್ ಮೆಡಿಕಲ್ ಸೆಂಟರ್ ಸಮೀಪದ ಮಹಾವೀರ್ ಮಾಲ್ ಹತ್ತಿರ ರೆಸ್ಟೋರೆಂಟ್ ಕಾರ್ಯಾರಂಭಗೊಳ್ಳಲಿದೆ.ಶುಭಾರಂಭ ಸಮಾರಂಭವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರು, ಮಾಜಿ ಸಂಸದ ಹಾಗೂ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಲಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮಹಾವೀರ್ ಮೆಡಿಕಲ್ ಸೆಂಟರ್ ಮಾಲೀಕ ಅಶೋಕ್ ಪಡಿವಾಲ್, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಮಹಾವೀರ್ ವೆಂಚರ್ಸ್‌ನ ಮ್ಯಾನೇಜಿಂಗ್ ಪಾರ್ಟ್ನರ್ ಅಜಯ್ ಪಡಿವಾಲ್, ಶ್ರೀ ಅಜಯ್ ಪಡಿವಾಲ್, ಮ್ಯಾನೇಜಿಂಗ್ ಪಾರ್ಟ್ನರ್, ಮಹಾವೀರ ವೆಂಚರ್ಸ್ಶ್ರೀ ಆಲ್ವಿನ್ ಜೋಯಲ್ ನೊರೊನ್ಹಾಶ್ರೀ ಸಂಜೀವ ಪೂಜಾರಿ, ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲ ನಿಯಮಿತ, ಬಿ.ಸಿ. ರೋಡ್ಸ್ಥಾಪಕ ಸದಸ್ಯರು, ಡಿ.ಕೆ. ಗ್ರೂಪ್ ಆಫ್ ಕಂಪನೀಸ್; ವ್ಯವಸ್ಥಾಪಕ ನಿರ್ದೇಶಕರು, ದಕ್ಷಿಣ ಕನ್ನಡ ಮ್ಯೂಚುಯಲ್ ಬೆನಿಫಿಟ್ ನಿಧಿ ಲಿಮಿಟೆಡ್, ಬುಡಿಯಾರ್ ರಾಧಾಕೃಷ್ಣ ರೈ, ಮಾಜಿ ಅಧ್ಯಕ್ಷರು, APMC, ಪುತ್ತೂರುಶ್ರೀ ಸಹಜ್ ರೈ ಬಳಜ್ಜ ಸ್ಥಾಪಕ ಅಧ್ಯಕ್ಷರು, ವಿಜಯ ಸಾಮ್ರಾಟ್ (ರಿ.), ಪುತ್ತೂರು,ಶ್ರೀ ಶಿವರಾಮ ಆಳ್ವ, ಉದ್ಯಮಿಗಳು,ಶ್ರೀ ಪ್ರಮೋದ್ ಕುಮಾರ್, DYSP, ಪುತ್ತೂರು ಉಪವಿಭಾಗ,ಶ್ರೀ ಹೆಚ್. ಮಹಮ್ಮದ್ ಅಲಿ, ಅಧ್ಯಕ್ಷರು, ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ,ಡಾ. ಸುರೇಶ್ ಪುತ್ತೂರಾಯ, ವೈದ್ಯಕೀಯ ತಜ್ಞರು, ಎಸ್.ಆರ್. ಸತೀಶ್ಚಂದ್ರ, ಅಧ್ಯಕ್ಷರು, ಕ್ಯಾಂಸ್ಕೋ ಲಿಮಿಟೆಡ್, ಪುತ್ತೂರು, ಮಂಗಳೂರುಶ್ರೀ ವಿಜಯ ಕುಮಾರ್ ಸೊರಕೆ, ಉದ್ಯಮಿ, ಪ್ರಗತಿಪರ ಕೃಷಿಕ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಸಚಿನ್ ನಾಯಕ್ ಎಸ್., ಸಚಿನ್ ಟ್ರೇಡಿಂಗ್, ಪುತ್ತೂರುಶ್ರೀ ವಿಕ್ಟರ್ ಶರೋನ್ ಡಿಸೋಜ, ಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಅಭ್ಯುದಯ ಸೌಹಾರ್ದ ಕೋಆಪರೇಟಿವ್ ಸೊಸೈಟಿ,ಶ್ರೀ ಸುಬ್ರಹ್ಮಣ್ಯ ನಟ್ಟೋಜ, ಅಧ್ಯಕ್ಷರು, ಅಂಬಿಕಾ ಶಿಕ್ಷಣ ಸಂಸ್ಥೆಗಳ ಸಮೂಹ, ಪುತ್ತೂರುಶ್ರೀ ಮನ್ಮಥ ಜೆ. ಶೆಟ್ಟಿ, ಮಧ್ಯಸ್ಥರು ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು,ಸಾಜ ರಾಧಾಕೃಷ್ಣ ಆಳ್ವ, ಅಧ್ಯಕ್ಷರು, ಭಾರತೀಯ ಜನತಾ ಪಾರ್ಟಿ ಪುತ್ತೂರು ಗ್ರಾಮಾಂತರ ಮಂಡಲಡಾ. ಶ್ರೀಕೃಷ್ಣ ಉಪಾಧ್ಯಾಯ, ಪುರೋಹಿತರು, ವಾಗ್ಮಿಗಳು ಹಾಗೂ ಚಿಂತಕರುವಿನೀತ್ ಕುಮಾರ್, ತುಳು ಚಲನಚಿತ್ರ ನಟಸುದರ್ಶನ್ ಭಟ್, ಭಟ್ & ಭಟ್, ಖ್ಯಾತ ಯೂಟ್ಯೂಬರ್ಮನೋಹರ್ ಭಟ್, ಭಟ್ & ಭಟ್, ಖ್ಯಾತ ಯೂಟ್ಯೂಬರ್

ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.ಇದರೊಂದಿಗೆ ವಿವಿಧ ಕ್ಷೇತ್ರಗಳ ಗಣ್ಯರು, ಉದ್ಯಮಿಗಳು, ವೈದ್ಯರು, ಜನಪ್ರತಿನಿಧಿಗಳು ಹಾಗೂ ಸಾಮಾಜಿಕ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.‘ವಿಶ್ವರಂಜಿನಿ’ಯಲ್ಲಿ ಗ್ರಾಹಕರಿಗೆ ಆರಾಮದಾಯಕ ಊಟದ ಅನುಭವ ನೀಡುವ ಉದ್ದೇಶದಿಂದ ಎಸಿ ಮತ್ತು ನಾನ್-ಎಸಿ ಡೈನಿಂಗ್, ವಿಶಾಲ ಪಾರ್ಕಿಂಗ್ ವ್ಯವಸ್ಥೆ, ಸೆಲೆಬ್ರೇಷನ್ ಹಾಲ್, ಎಸಿ ಕಾನ್ಫರೆನ್ಸ್ ರೂಂ ‘ಮಾಯಾ ಸಭಾ’ ಹಾಗೂ ಸ್ವಚ್ಛ ಮತ್ತು ಹೈಜೀನಿಕ್ ಶೌಚಾಲಯ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ.ಹುಟ್ಟುಹಬ್ಬ, ಕುಟುಂಬ ಸಮಾರಂಭ ಹಾಗೂ ವಿಶೇಷ ಆಚರಣೆಗಳಿಗೆ ಸೆಲೆಬ್ರೇಷನ್ ಹಾಲ್ ವ್ಯವಸ್ಥೆಯೂ ಇರಲಿದೆ. ವೇಗದ ಸೇವೆ ಹಾಗೂ ಆತಿಥ್ಯದೊಂದಿಗೆ ಗುಣಮಟ್ಟದ ಸಸ್ಯಾಹಾರಿ ಆಹಾರವನ್ನು ಒದಗಿಸುವುದು ರೆಸ್ಟೋರೆಂಟ್‌ನ ವಿಶೇಷತೆಯಾಗಿದೆ.ಶ್ರೀ ವಿಶ್ವನಾಥ ಪೂಜಾರಿ ಮತ್ತು ಮಕ್ಕಳು ‘ವಿಶ್ವರಂಜೆನಿ’ಯ ಶುಭಾರಂಭಕ್ಕೆ ಸಾರ್ವಜನಿಕರನ್ನು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!