ಪತಿ ಮೇಲೆ ಅನುಮಾನಗೊಂಡು ಜಗಳ ಮಾಡಿಕೊಂಡು ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಗುಂಟೆಯಲ್ಲಿ ನಡೆದಿದೆ.

ಐಶ್ವರ್ಯ ಎಂಬ ಮಹಿಳೆ ಪತಿ ನವೀನ್ ಜೊತೆ ಜಗಳ ಮಾಡಿಕೊಂಡು ರೂಮ್ ಲಾಕ್ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

9 ವರ್ಷಗಳ ಹಿಂದೆ ಈ ಜೋಡಿಗಳ ಮದುವೆ ಆಗಿತ್ತು.ಮೊದಲು ಎಲ್ಲವೂ ಚೆನ್ನಾಗಿಯೇ ಇತ್ತು, ಆದರೆ ಬರು ಬರುತ್ತಾ ಪತಿ ನವೀನ್ ಮೇಲೆ ಪತ್ನಿಗೆ ಅನುಮಾನ ಶುರುವಾಗಿದೆ. ಪತಿ ಅನೈತಿಕ ಸಂಬಂಧಇಟ್ಟುಕೊಂಡಿದ್ದಾರೆಂದು ಶಂಕಿಸಿ ಪತ್ನಿ ಐಶ್ವರ್ಯಾ ಜಗಳ ಮಾಡಿದ್ದಾರೆ.ಇತ್ತೀಚೆಗೆ ಧರ್ಮಸ್ಥಳಕ್ಕೆಂದು ನವೀನ್ ಟ್ರಿಪ್ ಹೋಗಿದ್ದರು. ಅವರು ಮನೆಗೆ ವಾಪಸ್ ಬಂದಾಗ ಮತ್ತೆಪತಿ ಹಾಗೂ ಪತ್ನಿ ಜಗಳ ನಡೆದಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!