
ಕಾರವಾರ ನೌಕಾನೆಲೆಯ ಭಾಗವಾದ ಕದಂಬ ನೌಕಾನೆಲೆಯ ಚಿತ್ರಗಳನ್ನು ಪಾಕಿಸ್ತಾನಿ ಗುಪ್ತಚರರಿಗೆ ರವಾನಿಸಿದ ಪ್ರಕರಣದಲ್ಲಿ ಇಬ್ಬರನ್ನು ಎನ್ಐಎ ಬಂಧಿಸಿದೆ. ಕಾರವಾರ ಮುದಗಾದ ನಿವಾಸಿ ವೇತನ್ ತಂಡೇಲ್ ಮತ್ತು ಅಂಕೋಲ ನಿವಾಸಿ ಅಕ್ಷಯ್ ನಾಯ್ಕ್ ಎಂಬುವವರನ್ನು ನಿನ್ನೆ ಎನ್ಐಎ ಬಂಧಿಸಿದೆ.
ಇಬ್ಬರೂ ಕಾರವಾರ ನೌಕಾನೆಲೆಯಲ್ಲಿ ತಾತ್ಕಾಲಿಕ ಉದ್ಯೋಗಿಗಳಾಗಿದ್ದರು.
ನೌಕಾನೆಲೆಯ ಒಳಗಿನ ಚಿತ್ರಗಳನ್ನು ಪಾಕಿಸ್ತಾನಿ ಗುಪ್ತಚರರು ಪಡೆದುಕೊಂಡಿದ್ದಾರೆ ಎಂಬ ಮಾಹಿತಿ 2023 ರಲ್ಲಿ ಭಾರತೀಯ ಗುಪ್ತಚರ ಸಂಸ್ಥೆಗಳಿಗೆ ಲಭ್ಯವಾಗಿತ್ತು. 2024 ರಲ್ಲಿ ಈ ಪ್ರಕರಣದ ತನಿಖೆಯನ್ನು ಎನ್ಐಎ ಅಧಿಕೃತವಾಗಿ ವಹಿಸಿಕೊಂಡಿತು. ಕಾರವಾರ ನೌಕಾನೆಲೆಯ ಕೆಲವು ಅಧಿಕಾರಿಗಳನ್ನು ಸೇರಿದಂತೆ ಆಗ ಎನ್ಐಎಯ ಹೈದರಾಬಾದ್ ಘಟಕ ವಿಚಾರಣೆ ನಡೆಸಿತ್ತು.
ವಿಚಾರಣೆಯಿಂದ ಪಡೆದ ಮಾಹಿತಿಯನ್ನು ವಿಶ್ಲೇಷಿಸಿದ ನಂತರ, ಇಲ್ಲಿ ಮೊದಲು ಕೆಲಸ ಮಾಡುತ್ತಿದ್ದ ಇಬ್ಬರು ತಾತ್ಕಾಲಿಕ ಉದ್ಯೋಗಿಗಳ ಮೇಲೆ ಅನುಮಾನ ಬಂದಿತು. ಹುಡುಗಿಯರ ಹೆಸರಿನಲ್ಲಿ ನಕಲಿ ಪ್ರೊಫೈಲ್ಗಳನ್ನು ರಚಿಸುವ ಮೂಲಕ ಪಾಕಿಸ್ತಾನಿ ಗುಪ್ತಚರರು ಈ ಇಬ್ಬರನ್ನು ಸಂಪರ್ಕಿಸಿದ್ದಾರೆ ಎಂದು ಎನ್ಐಎ ಮೂಲಗಳು ತಿಳಿಸಿವೆ. ಇಬ್ಬರನ್ನೂ ವಿವರವಾಗಿ ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುವುದು ಎಂದು ಎನ್ಐಎ ಸ್ಪಷ್ಟಪಡಿಸಿದೆ.
ಕಾರವಾರ ಮತ್ತು ಅಂಕೋಲಾದಲ್ಲಿ NIA ಕಾರ್ಯಾಚರಣೆ. ನೌಕಾನೆಲೆಯ ಮಾಹಿತಿ ಸೋರಿಕೆ ಹಿನ್ನೆಲೆಯಲ್ಲಿ ಇಬ್ಬರ ಬಂಧನ ಮಾಡಿದೆ. ಎನ್ಐಎ ಅಧಿಕಾರಿಗಳು ಬಂಧಿತ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಹೆಚ್ಚುವರಿ ಸಿಜೆಎಂ ನ್ಯಾಯಧೀಶ ಗಣೇಶ ಪಡಿಯಾರ್ ಅವರ ಮುಂದೆ ಆರೋಪಿಗಳನ್ನು ಹಾಜರುಪಡಿಸಿ ಟ್ರಾನ್ಸಿಟ್ ವಾರೆಂಟ್ ಮೂಲಕ ಹೈದರಾಬಾದ್ ಗೆ ಕರೆದೊಯ್ಯುತ್ತಿದ್ದಾರೆ. ಇದಾದ ನಂತರ, ಆರೋಪಿಗಳನ್ನು ನಾಳೆ ವಿಶಾಖಪಟ್ಟಣ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಬಳಿಕ ಮತ್ತೆ ವಶಕ್ಕೆ ಪಡೆದು ಎನ್ಐಎ ವಿಚಾರಣೆ ನಡೆಸಲಿದೆ.






