
ಕಾರು ಅಪಘಾತದಲ್ಲಿ ಬಜರಂಗದಳ ಪ್ರಾಂತ ಸಂಚಾಲಕ ರಘು ಸಕಲೇಶಪುರ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.
ಚಿಕ್ಕಮಗಳೂರು ತಾಲೂಕಿನಶಂಕರ್ ಫಾಲ್ಸ್ ಬಳಿ ಸೋಮವಾರ ಕಾರು ಅಪಘಾತವಾಗಿದೆ. ಚಿಕ್ಕಮಗಳೂರು ಬಂದ್ ಹಿನ್ನಲೆ ಶೃಂಗೇರಿಗೆ ದಿಕ್ಕೂಚಿ ಭಾಷಣಕ್ಕೆ ತೆರಳಿದ್ದರು
ಶೃಂಗೇರಿ ಯಿಂದ ವಾಪಾಸ್ ಬರುವಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಕಾಂಪೌಂಡ್ ಗೆ ಡಿಕ್ಕಿ ಹೊಡೆದು ಬಳಿಕ ಮರಕ್ಕೆ ಡಿಕ್ಕಿ ಹೊಡೆದಿದೆ.ಕಾರಿನಲ್ಲಿದ್ದ ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಈ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ






