ಮಹಾರಾಷ್ಟ್ರದ ಹಿರಿಯ ಐಪಿಎಸ್‌‍ ಅಧಿಕಾರಿ ಶಿಲ್ವಂತ್‌ ನಾಂದೇಡ್ಕರ್‌ ಅವರ ಪುತ್ರನೇಣು ಹಾಕಿಕೊಂಡು ಆತಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿ ನಡೆದಿದೆ.

12ನೇ ತರಗತಿಯಲ್ಲಿ ಓದುತ್ತಿದ್ದ ಸಾಹಿಲ್‌ ಶಿಲ್ವಂತ್‌ ನಾಂದೇಡ್ಕ(17) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದು,ತಮ ನಿವಾಸದಲ್ಲಿಯೇ ಆತಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ತನ್ನ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಾಹಿಲ್‌ ಪತ್ತೆಯಾಗಿದ್ದು, ಆತ ಯಾವುದೇ ಡೆತ್‌ನೋಟ್‌‍ ಬರೆದಿಲ್ಲ. ಆದರೆ ತನ್ನ ಮಲಗುವ ಕೋಣೆಯ ಕನ್ನಡಿಯ ಮೇಲೆ ಸ್ಕೆಚ್‌ ಪೆನ್ನಿನಿಂದ ಸಂದೇಶವನ್ನು ಬರೆದಿದ್ದಾನೆ.

ಆತಹತ್ಯೆ ಮಾಡಿಕೊಳ್ಳುವ ಮೊದಲು ಸಾಹಿಲ್‌ ಕನ್ನಡಿಯ ಮೇಲೆ ನಾನು ಈ ಜೀವನ ಮತ್ತು ದೇಹವನ್ನು ಸಾಕಷ್ಟು ಆನಂದಿಸಿದ್ದೇನೆ. ನಾನು ಮರುಪ್ರಾರಂಭಿಸಲು ಬಯಸುತ್ತೇನೆ ಎಂದು ಬರೆದಿದ್ದಾನೆ.

ಬಗ್ಗೆ ವೇದಾಂತ್‌ ನಗರ ಠಾಣೆಯ ಪೊಲೀಸರು ಆಕಸಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಗೆ ಕಾರಣವೇನು ಅಂತಾ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸಸರು ತಿಳಿಸಿದ್ದಾರೆ.ಶೈಕ್ಷಣಿಕ ಒತ್ತಡದಿಂದ ಸಾಹಿಲ್‌ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!