
ಪುತ್ತೂರು:ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು ನಗರದ ವತಿಯಿಂದ ಆ.3ರಂದು ಕಾರ್ಜಾಲು ಗದ್ದೆಯಲ್ಲಿ ನಡೆಯಲಿರುವ ‘ಪುತ್ತೂರ ಕೆಸರ್ದ ಗೊಬ್ಬು’ ಸಮಿತಿಯ ಅಧ್ಯಕ್ಷರಾಗಿ ಸುರೇಶ್ ಆರ್, ಕಾರ್ಯಾಧ್ಯಕ್ಷರಾಗಿ ಉಮೇಶ್ ಕೃಷ್ಣನಗರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸಾತ್ವಿಕ್ ಕಲ್ಲೇಗ ಆಯ್ಕೆಯಾಗಿದ್ದಾರೆ.
ಸಮಿತಿಯ ಗೌರವ ಸಲಹೆಗಾರರಾಗಿ ಅರುಣ್ ಕುಮಾರ್ ಪುತ್ತಿಲ, ಗೌರವ ಅಧ್ಯಕ್ಷರಾಗಿ ಅನಿಲ್ ತೆಂಕಿಲ, ಶ್ಯಾಮ್ ಪ್ರಸಾದ್, ಕಾರ್ಯದರ್ಶಿಯಾಗಿ ಜಯಪ್ರಕಾಶ್, ದಯರಾಜ್ ತೆಂಕಿಲ, ಅಭಿಲಾಶ್ ರೈ, ಪ್ರಮುಖ್ ನೆಲ್ಲಿಕಟ್ಟೆ, ಉಪಾಧ್ಯಕ್ಷರಾಗಿ ಸಂದೇಶ್ ಕಲ್ಲೇಗ, ಕಾರ್ತಿಕ್ ನಗರ, ಕಿಶೋರ್ ನಗರ, ಸಂಘಟನಾ ಕಾರ್ಯದರ್ಶಿಯಾಗಿ ರಾಜೇಶ್ ಬೊಳ್ಳಾರು, ರವಿ ಕೃಷ್ಣನಗರ, ಅಭಿಷೇಕ್ ಶೆಟ್ಟಿ, ಜಯಂತ್ ಗಾಣಿಗ ಹಾಗೂ ಕೋಶಾಧಿಕಾರಿಯಾಗಿ ದಯಾನಂದ ಶೆಟ್ಟಿ ಆಯ್ಕೆಯಾಗಿದ್ದಾರೆ.






