ಪುತ್ತೂರು: ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಇದರ ಯುನೈಟೆಡ್ ಅರಬ್ ಎಮಿರೇಟ್ಸ್ (ಯು ಎ ಇ) ರಾಷ್ಟ್ರೀಯ ಸಮಿತಿಯ ಮಹಾಸಭೆಯು ದುಬೈ- ದೇರಾ ಮಾಲಿಕ್ ಹೋಟೆಲ್ ಸಭಾಂಗಣದಲ್ಲಿ ಕೇಂದ್ರ ಸಮಿತಿ ಉಪಾಧ್ಯಕ್ಷ ಡಾ.

ಎಮ್ಮೆಸ್ಸೆಂ ಝೈನಿ ಕಾಮಿಲ್ ನೇತೃತ್ವದಲ್ಲಿ ನಡೆಯಿತು.

ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಬಶೀರ್ ಇಂದ್ರಾಜೆ, ಗಲ್ಫ್ ಕಮಿಟಿಯ ಸಂಚಾಲಕ ಶಂಸುದ್ದೀನ್ ಬೈರಿಕಟ್ಟೆ ಆಯ್ಕೆ ಪ್ರಕ್ರಿಯೆಗೆ ನೇತೃತ್ವ ನೀಡಿದರು.

ನೂತನ ಸಮಿತಿಯ ಅಧ್ಯಕ್ಷರಾಗಿ ಇಬ್ರಾಹಿಂ ಬ್ರೈಟ್ ವಿಟ್ಲ ಅಬುಧಾಬಿ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಶಕೂರ್ ಮಣಿಲ ದುಬೈ, ಕೋಶಾಧಿಕಾರಿಯಾಗಿ ಅಬ್ದುಲ್ಲತೀಫ್ ತಿಂಗಲಾಡಿ ಶಾರ್ಜಾ, ಉಪಾಧ್ಯಕ್ಷರಾಗಿ ಅಬ್ದುಲ್ ರಝ್ಝಾಖ್ ಹಾಜಿ ಮಣಿಲ, ಅಶ್ರಫ್ ಶಾ ಮಾಂತೂರ್, ಇಬ್ರಾಹಿಂ ಮದನಿ ಸಾಮಣಿಗೆ, ನಝೀರ್ ಹಾಜಿ ಕೆಮ್ಮಾರ, ಕಾರ್ಯದರ್ಶಿಗಳಾಗಿ ರಿಫಾಈ ಪಟೇಲ್ ಗೂನಡ್ಕ, ಕೆ. ಎಚ್. ಮುಹಮ್ಮದ್ ಕುಂಞಿ ಸಖಾಫಿ ಈಶ್ವರಮಂಗಿಲ, ಅಬ್ದುಲ್ ಖಾದರ್ ಸಅದಿ ಏಣಾವರ, ಮುಹಮ್ಮದ್ ರಫೀಕ್ ತೆಕ್ಕಾರು ಅವರನ್ನು ಆಯ್ಕೆ ಮಾಡಲಾಯಿತು.

ಸದಸ್ಯರಾಗಿ ಅಬ್ದುಲ್ಲ ಹಾಜಿ ನಲ್ಕ, ನವಾಝ್ ಕೋಟೆಕಾರ್, ಇಖ್ಬಾಲ್ ಕಾಜೂರ್, ಅಬ್ದುಲ್ ಕರೀಂ ಮುಸ್ಲಿಯಾರ್ ಶಾರ್ಜಾ, ಅಬ್ದುಲ್ ರಝ್ಝಾಖ್ ಬುಸ್ತಾನಿ ಪರ್ಲಡ್ಕ, ಅಬ್ದುಲ್ ಖಾದರ್ ಸಾಲೆತ್ತೂರು, ಹಸೈನಾರ್ ಅಮಾನಿ ಅಜ್ಜಾವರ, ಸಿದ್ದೀಕ್ ಅಮಾನಿ ಕುಡ್ತಮೊಗರ್, ಅಬ್ದುಲ್ ಹಕೀಮ್ ತುರ್ಕಳಿಕೆ, ಇಸ್ಮಾಯಿಲ್ ಮದನಿನಗರ್, ಅಬ್ದುಲ್ ಕರೀಂ ಬಿಕರ್ನಕಟ್ಟೆ ಹಸನ್ ಕಂಬಳಬೆಟ್ಟು, ಇಖ್ಬಾಲ್ ಕುಂದಾಪುರ, ಕಲಂದರ್ ಕಬಕ, ಹನೀಫ್ ಶಾಮಿಲಿ ಕಣ್ಣೂರ್, ಅಕ್ರಮ್ ಬಿಸಿ ರೋಡ್, ಸಲೀಂ ಸಖಾಫಿ ಮೈದಾನಿಮೂಲೆ, ಇರ್ಷಾದ್ ಕೊಂಡಂಗೇರಿ, ಇಸ್ಹಾಖ್ ಕೂರ್ನಡ್ಕ, ಅಬ್ದುಲ್ಲ ಹಾಜಿ ಪೆರುವಾಯಿ, ಸ್ವಾಲಿಹ್ ಜೌಹರಿ ಕುಂಬ್ರ, ಸಲಾಮ್ ಅಳಿಕೆ, ಅಬ್ದುಲ್ ರಹೀಮ್ ಕೋಡಿ ಇವರನ್ನು ಆರಿಸಲಾಯಿತು.

ಸಮಾರಂಭದಲ್ಲಿ ನಿಕಟ ಪೂರ್ವ ಅಧ್ಯಕ್ಷ ಮುಹಮ್ಮದ್ ಶಕೂರ್ ಮಣಿಲ ಅಧ್ಯಕ್ಷತೆ ವಹಿಸಿದ್ದರು. ಕೆಸಿಎಫ್ ಅಂತಾರಾಷ್ಟೀಯ ಸಮಿತಿ ಕೋಶಾಧಿಕಾರಿ ಅಬ್ದುಲ್ ಹಮೀದ್ ಸಅದಿ ಉದ್ಘಾಟಿಸಿದರು. ಇಬ್ರಾಹಿಂ ಮದನಿ ಸಾಮಣಿಗೆ ಪ್ರಾರ್ಥನೆ ನಿರ್ವಹಿಸಿದರು.

ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಮೀದ್ ಪಿ.ಎಂ ಎಚ್, ಸಂಘಟನಾ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ಎಮ್ಮೆಮಾಡು, ಕುಂಬ್ರ ಕೆಐಸಿ ಸಂಸ್ಥೆಯ ಜಿಸಿಸಿ ಘಟಕದ ಅಧ್ಯಕ್ಷ ಅಶ್ರಫ್ ಶಾ ಮಾಂತೂರು, ಅಶ್ರಫ್ ಹಾಜಿ ಅಡ್ಯಾರ್ ಶುಭ ಹಾರೈಸಿ, ಮಾತನಾಡಿದರು.

ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ಹಾಜಿ ನಝೀರ್ ಕೆಮ್ಮಾರ ಸ್ವಾಗತಿಸಿ, ಕಾರ್ಯದರ್ಶಿ ಮುಹಮ್ಮದ್ ಕುಂಞಿ ಸಖಾಫಿ ವಂದಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!