
ಸರ್ಕ್ಯೂಟ್ ಹೌಸ್ ನಲ್ಲಿ ಸಚಿವ ದಿನೇಶ್ ಗುಂಡೂರಾವ್ ಸಾರ್ವಜನಿಕ ಭೇಟಿ ವೇಳೆ ದ.ಕ ಜಿಲ್ಲೆಯ ಮುಸ್ಲಿಂ ಕಾಂಗ್ರೆಸ್ ಮುಖಂಡರು ಅಂತರ ಕಾಯ್ದುಕೊಂಡಿದ್ದಾರೆ. ಗುಂಡೂರಾವ್ ಭೇಟಿಗೂ ಜಿಲ್ಲೆಯ ಮುಸ್ಲಿಂ ಮುಖಂಡರು ಆಗಮಿಸಲಿಲ್ಲ.
ಜಿಲ್ಲೆಯ ಇತರೆ ಕೆಲ ಕಾಂಗ್ರೆಸ್ ನಾಯಕರೂ ಗುಂಡೂರಾವ್ ರಿಂದ ಅಂತರ ಕಾಯ್ದುಗುಂಡೂರಾವ್ ಜೊತೆಗಿರೋ ಎಂಎಲ್ ಸಿ ಐವನ್ ಡಿಸೋಜಾ, ಕೆಪಿಸಿಸಿ ಕಾರ್ಯದರ್ಶಿ ಪದ್ಮರಾಜ್ ಬಿಟ್ಟು ಉಳಿದಂತೆ ಗುಂಡೂರಾವ್ ಜೊತೆ ಗುರುತಿಸಿಕೊಳ್ಳಲು ಕಾಂಗ್ರೆಸ್ ನಾಯಕರ ಹಿಂದೇಟು ಹಾಕಿದ್ದಾರೆ. ಈಗಾಗಲೇ ಕಾಂಗ್ರೆಸ್ ಜವಾಬ್ದಾರಿಗೆ ಮುಸ್ಲಿಂ ನಾಯಕರು ರಾಜೀನಾಮೆ ನೀಡಿದ್ದಾರೆ. ಬಂಟ್ವಾಳದ ಅಬ್ದುಲ್ ರೆಹಮಾನ್ ಹತ್ಯೆ ಬೆನ್ನಲ್ಲೇ ಗುಂಡೂರಾವ್ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಗುಂಡೂರಾವ್ ಉಸ್ತುವಾರಿ ಬದಲಾವಣೆಗೂ ಮುಸ್ಲಿಂ ಹಾಗೂ ಕೆಲ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದಿದ್ದಾರೆ.ಕೊಂಡಿದ್ದಾರೆ.ಉಸ್ತುವಾರಿ ಸಚಿವರು ಬಂದರೂ ಜಿಲ್ಲಾ ಮಟ್ಟದ ನಾಯಕರು ಭೇಟಿಗೆ ಆಗಮಿಸಲಿಲ್ಲ. ಕಾಂಗ್ರೆಸ್ ನ ಹಲವು ನಾಯಕರಿಗೆ ದಿನೇಶ್ ಗುಂಡೂರಾವ್ ಜೊತೆ ಮುನಿಸಿಕೊಂಡಿದ್ದಾರೆ. ಪ್ರತೀ ಬಾರಿ ಗುಂಡೂರಾವ್ ಜೊತೆ ಕಾಣಿಸಿಕೊಳ್ಳುವ ನಾಯಕರು ಮಾಯವಾಗಿದ್ದಾರೆ.






