ಪುತ್ತೂರು: ನಗರದ ಎಪಿಎಂಸಿ ರಸ್ತೆಯಲ್ಲಿರುವ ಸಿಟಿ ಆಸ್ಪತ್ರೆ ಹತ್ತಿರ, ಚಿತ್ತಾರ ಸೈನ್ ಗ್ಯಾಲರಿ ಹಿಂದೆ ನೂತನವಾಗಿ ನಿರ್ಮಿತ “ಕತ್ರಿಬೈಲ್ ಮಲ್ಟಿ-ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ & ಇಂಪ್ಲಾಂಟ್ ಸೆಂಟರ್” ನಾಳೆ (ಅ.31) ಬೆಳಗ್ಗೆ 10.30ಕ್ಕೆ ಶುಭಾರಂಭವಾಗಲಿದೆ.

ಈ ಕ್ಲಿನಿಕ್‌ನಲ್ಲಿ ವಿವಿಧ ದಂತ ಚಿಕಿತ್ಸಾ ಸೌಲಭ್ಯಗಳು ಲಭ್ಯವಿದ್ದು, ಸಮಾಲೋಚನೆ ಹಾಗೂ ಹಲ್ಲಿನ ಎಕ್ಸ್-ರೇ ಸೇವೆಗಳು, ಡೆಂಟಲ್ ಇಂಪ್ಲಾಂಟ್‌ಗಳು, ಕೌನ್ ಮತ್ತು ಬ್ರಿಡ್ಜ್, ದಂತ ಪಂಕ್ತಿ (ಹಲ್ಲಿನ ಸೆಟ್), ದಂತದ ಕುಳಿ ತುಂಬುವಿಕೆಗಳು, ರೂಟ್‌ನಲ್ ಚಿಕಿತ್ಸೆ, ಡೆಂಟಲ್ ಕ್ಲೀನಿಂಗ್, ಸ್ಟೈಲ್ ಡಿಸೈನಿಂಗ್, ವಕ್ರದಂತ ಚಿಕಿತ್ಸೆ, ಹಲ್ಲು ಕೀಳುವಿಕೆ, ಹಲ್ಲು ಬಿಳುಪುಗೊಳಿಸುವುದು ಮತ್ತು ಓರಲ್ ಸ್ಕ್ಯಾನಿಂಗ್ ಸೇರಿದಂತೆ ಅಗ್ರಗಣ್ಯ ಸೇವೆಗಳು ದೊರೆಯಲಿವೆ.

ಕ್ಲಿನಿಕ್‌ನ ಮುಖ್ಯ ದಂತ ವೈದ್ಯರಾಗಿರುವ ಡಾ. ಶಂಕರ ಕೃಷ್ಣ ಕೆ (BDS, MDS) ಪ್ರೊಸೊಡಾಂಟಿಸ್ಟ್ ಹಾಗೂ ಇಂಪ್ಲಾಂಟಾಲಜಿಸ್ಟ್ ಆಗಿದ್ದು, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಗುಣಮಟ್ಟದ ಚಿಕಿತ್ಸೆಯನ್ನು ನೀಡಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು: ☎️ 94496 28212

Leave a Reply

Your email address will not be published. Required fields are marked *

Join WhatsApp Group
error: Content is protected !!