
ಪುತ್ತೂರು : ಪುತ್ತೂರಿನ ಅರುಣ ಕಲಾಮಂದಿರದಲ್ಲಿ ಕುಂದಾಪುರದ ಬೆನಕ ಇವೆಂಟ್ಸ್ ನ ಆಶ್ರಯದಲ್ಲಿ ಬೃಹತ್ ಆಹಾರ ಮತ್ತು ಸ್ವದೇಶಿ ಮೇಳ ಕಾರ್ಯಕ್ರಮವು ಅ.31ರಿಂದ ನ.03ರವರೆಗೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ನೈಸರ್ಗಿಕ ಸೌಂದರ್ಯ ವರ್ದಕಗಳು, ಖಾದಿ ಉತ್ಪನ್ನಗಳು, ದೇಶಿಯ ಆಹಾರಗಳು, ನಿತ್ಯ ಬಳಕೆ ವಸ್ತುಗಳು, ಸಾವಯವ ಉತ್ಪನ್ನಗಳು, ಸಿರಿಧಾನ್ಯಗಳು, ಆಯುರ್ವೇದ ಉತ್ಪನ್ನಗಳು, ಫ್ಯಾನ್ಸಿ ಸೀರೆಗಳು, ಗೃಹ ಅಲಂಕಾರಿಕ ವಸ್ತುಗಳು, ರೆಡಿಮೆಡ್ ಡ್ರೆಸ್ಗಳು, ಚನ್ನಪಟ್ಟಣದ ಬೊಂಬೆಗಳು, ಇಳಕಲ್ ಸೀರೆಗಳು, ಒನ್ ಗ್ರಾಂ ಗೋಲ್ಡ್ ಜ್ಯುವೆಲರಿ, ಮಕ್ಕಳ ಉಡುಪುಗಳು, ಹಪ್ಪಳ ಮತ್ತು ಸಂಡಿಗೆ, ಆದಿವಾಸಿ ರೈಲ್ ಹೇರ್ ಆಯಿಲ್ಸ್ ಹೋಂಮೆಡ್ ಕಾಂಡಿಮೆAಡ್ಸ್ & ಉಪ್ಪಿನಕಾಯಿ, ಉತ್ತರ ಮತ್ತು ದಕ್ಷಿಣ ಭಾರತದ ಆಹಾರಗಳು, ಇನ್ನೂ ಹತ್ತು ಹಲವು ಉತ್ಪನ್ನಗಳ ರುಚಿ ನೋಡಿ ಜಿಲೇಬಿ & ಹೋಳಿಗೆಯ ಹಲವು ಸ್ಟಾಲ್ಗಳು ಲಭ್ಯವಿದ್ದು, ಜೊತೆಗೆ ಹಲಸು, ಮಾವಿನ ಗಿಡಗಳು, ಹೂವಿನ ಗಿಡ, ಗೆಡ್ಡೆಗಳು, ತರಕಾರಿ ಬೀಜ ಹಾಗೂ ಹಲವು ಅನೇಕ ಗಿಡಗಳು ದೊರೆಯಲಿದೆ. ನಿಮ್ಮ ಹಳೆಯ ಜರಿ ಸೀರೆಗಳನ್ನು ಖರೀದಿಸಿ, ತಕ್ಷಣ ಹಣ ಕೂಡ ನೀಡಲಾಗುತ್ತದೆ.ಇದರೊಂದಿಗೆ ವಿಶೇಷವಾಗಿ ಮಾವು, ಹಲಸು, ಹೂವಿನ ಗಿಡಗಳು, ತರಕಾರಿ ಬೀಜಗಳ ಮಳಿಗೆಯೂ ಇರಲಿವೆ. ಹಳೆಯ ಜರಿಸೀರೆಗಳನ್ನು ಮಾರಾಟ ಮಾಡುವ ಅವಕಾಶವೂ ಜನರಿಗೆ ಒದಗಿಸಲಾಗುವುದು ಎಂದರು.
ಕಾರ್ಯಕ್ರಮ ಸಂಯೋಜಕರಾದ ಭಾಸ್ಕರ ಪೂಜಾರಿ ಹಾಗೂ ಪ್ರಶಾಂತ್ ದೇವಾಡಿಗ ಇದ್ದರು. ಸಂಪರ್ಕಿಸಿ :
6360059579






