ಭೋಪಾಲ್:‌ ಸಂಭ್ರಮದ ಸಮಾರಂಭಕ್ಕೆ ಸಾಕ್ಷಿಯಾಗಬೇಕಾಗಿದ್ದ ಮದುವೆ ಕಾರ್ಯಕ್ರಮ ಕ್ರೈಮ್‌ ಡ್ರಾಮಾಕ್ಕೆ ಸಾಕ್ಷಿಯಾಗಿದೆ. ಭೋಪಾಲ್‌ ನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಮದುವೆ ಸಮಾರಂಭಕ್ಕೆ ನುಗ್ಗಿ ಮಂಟಪದಿಂದಲೇ ದರೋಡೆಕೋರ ವರನನ್ನು ಬಂಧಿಸಲಾಗಿದೆ.

ಕೆಲವು ಗಂಟೆಗಳ ನಂತರ, ವಧು ಕೊಹ್-ಎ-ಫಿಜಾ ಪೊಲೀಸ್ ಠಾಣೆಗೆ ಬಂದು ವರನಿಗಾಗಿ ಮನವಿ ಮಾಡಿದ ಘಟನೆಯೂ ನಡೆದಿದೆ.

“ಸಾಹಬ್, ನನ್ನ ಜೀವನ ನಾಶವಾಗುತ್ತದೆ. ನನ್ನ ತಪ್ಪೇನು? ಅವನು ಮಾಡಿದ ಅಪರಾಧಗಳ ಬಗ್ಗೆ ನನಗೆ ತಿಳಿದಿರಲಿಲ್ಲ. ಮನೆಯಲ್ಲಿ ಅತಿಥಿಗಳು ಕಾಯುತ್ತಿದ್ದರು. ಹಲ್ದಿ ಮತ್ತು ಇತರ ಆಚರಣೆಗಳು ಮುಗಿದಿವೆ” ಎಂದು ವಧು ಸೀಮಾ ಪೊಲೀಸ್ ಅಧಿಕಾರಿಗಳ ಮುಂದೆ ಅಳು ತೋಡಿಕೊಂಡಿದ್ದಾರೆ.

ಕಣ್ಣೀರನ್ನು ತಡೆದುಕೊಳ್ಳುತ್ತಾ, ಮದುವೆಯ ವಿಧಿವಿಧಾನಗಳನ್ನು ಪೂರ್ಣಗೊಳಿಸಲು ತನ್ನ ನಿಶ್ಚಿತಾರ್ಥದ ವ್ಯಕ್ತಿ ಆಕಾಶ್ ಅಥವಾ ಭೂರಾನನ್ನು ಕೇವಲ ಎರಡು ಗಂಟೆಗಳ ಕಾಲ ಬಿಡುಗಡೆ ಮಾಡುವಂತೆ ಅವಳು ಪೊಲೀಸರನ್ನು ಬೇಡಿಕೊಂಡಳು. ಅಧಿಕಾರಿಗಳು ನಿರಾಕರಿಸಿದಾಗ ಆಕೆ ಮಾಡಿದ ವಿನಂತಿ ಎಲ್ಲರನ್ನೂ ಅಚ್ಚರಿಗೆ ದೂಡಿತು. ಅವನ ಬಿಡುಗಡೆ ಅಸಾಧ್ಯವಾದರೆ, ಕನಿಷ್ಠ ಪಕ್ಷ ಪೊಲೀಸ್ ಕಸ್ಟಡಿಯಲ್ಲಿ ವಿವಾಹ ಕಾರ್ಯ ಪೂರ್ತಿ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಕೇಳಿಕೊಂಡರು.

ಬುಧವಾರ ಮಧ್ಯಾಹ್ನ ಪೊಲೀಸ್ ತಂಡವು ಮದುವೆ ಸ್ಥಳಕ್ಕೆ ತಲುಪಿ ಅಕ್ರಮ ಗ್ಯಾಂಗ್ ನ ನಾಯಕ ಎಂದು ಹೇಳಲಾಗುವ ಆಕಾಶ್ ನೀಲಕಂಠನನ್ನು ವಶಕ್ಕೆ ಪಡೆದಾಗ ನಾಟಕೀಯ ಘಟನೆ ನಡೆಯಿತು.

ಪೂಜೆ ಮಾಡುವ ಮೊದಲು‌ ಅತಿಥಿಗಳ ಎದುರೇ ಪೊಲೀಸ್ ಅಧಿಕಾರಿಗಳು ವರನನ್ನು ಕರೆದುಕೊಂಡು ಹೋದರು. ಆಕಾಶ್ ಜೊತೆಗೆ, ಪೊಲೀಸರು ಆತನ ಸಹಚರರಾದ ರಾಜಮ್ಜಿ ಠಾಕೂರ್, ಅಭಿಷೇಕ್ ಉಪಾಧ್ಯಾಯ, ಅಭಿಷೇಕ್ ಮೀನಾ, ನೀರಜ್ ಖಂಗೆ ಮತ್ತು ಅಮಿತ್ ಓಸ್ವಾಲ್ ಅವರನ್ನು ಬಂಧಿಸಿದರು. ಎಲ್ಲಾ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಕಳುಹಿಸಲಾಯಿತು.

Leave a Reply

Your email address will not be published. Required fields are marked *

Join WhatsApp Group
error: Content is protected !!