ಪುತ್ತೂರು: ಇಲ್ಲಿನ ಮಂಜಲ್ಪಡ್ಡು ನಿವಾಸಿ ಬಿ.ಎಸ್. ನವೀನ್ ಭಟ್ (18) ಅವರು ಅಲ್ಪಕಾಲದ ಅನಾರೋಗ್ಯದಿಂದ ಜುಲೈ 24ರ ತಡರಾತ್ರಿ ನಿಧನರಾದರು.ಅನಾರೋಗ್ಯ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.ಮೃತರು ತಂದೆ ಧರ್ ಭಟ್, ತಾಯಿ ವಿದ್ಯಾ, ಸಹೋದರಿ ನವ್ಯ ಹಾಗೂ ಅಜ್ಜಿ ಕಮಲಾಕ್ಷಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.









