
ಪುತ್ತೂರು: ಸರಕಾರದ ಉಚಿತ ಪಡಿತರ ಅಕ್ಕಿ ಪಡೆಯಲು ಬಂದ ಮಹಿಳೆಯೋರ್ವರ ಮೇಲೆ ರೇಷನ್ ಅಂಗಡಿ ಸಿಬ್ಬಂದಿ ಮಾನಭಂಗಕ್ಕೆ ಯತ್ನ ನಡೆಸಿದ್ದಾರೆ ಎಂದು ಆರೋಪಿಸಿ ಮಹಿಳೆಯೋರ್ವರು ಪೊಲೀಸರಿಗೆ ದೂರು ನೀಡಿದ ಘಟನೆ ಕೆಯ್ಯರಿನಿಂದ ವರದಿಯಾಗಿದೆ. ಸೆ.27ರಂದು ಬೆಳಿಗ್ಗೆ ಸ್ಥಳೀಯ ಮಹಿಳೆಯೋರ್ವರು ಪಡಿತರ ಅಕ್ಕಿ ಪಡೆಯಲು ಕೆಯ್ಯರು ರೇಷನ್ ಅಂಗಡಿಗೆ ಬಂದಿದ್ದು ಈ ವೇಳೆ ಅಂಗಡಿ ಸಿಬ್ಬಂದಿ ಮಹಿಳೆಯ ಮೇಲೆ ಕೈ ಹಾಕಿ ಮಾನಭಂಗಕ್ಕೆ ಯತ್ನ ನಡೆಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಬಗ್ಗೆ ಮಹಿಳೆ ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
