
ಪುತ್ತೂರು; ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ವಿಟ್ಲಭಾಗದಲ್ಲಿ ೨೪೦ ಎಕರೆ ಹಾಗೂ ಪುತ್ತೂರು ತಾಲೂಕಿನಲ್ಲಿ ೨೮೦ ಎಕರೆ ಸರ್ಕಾರಿ ಸ್ಥಳ ಗೇರು ಅಭಿವೃದ್ಧಿ ನಿಗಮದ ಕೈಯಲ್ಲಿದೆ. ಈ ಲೀಸ್ ರದ್ದಾಗಿ ೩೦ ವರ್ಷ ಕಳೆದಿದೆ. ಇದನ್ನು ಕೆಸಿಡಿಸಿ ನವೀಕರಿಸಿಲ್ಲ. ಈ ಜಾಗಗಳನ್ನು ಸರ್ಕಾರ ವಶಪಡಿಸಿಕೊಳ್ಳಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಪುತ್ತೂರು ತಾಪಂ ಸಭಾಂಗಣದಲ್ಲಿ ಸೋಮವಾರ ಸಂಜೆ ಕುಡಿಯುವ ನೀರು ಯೋಜನೆಗೆ ಸಂಬAಧಿಸಿ ವಿಧಾನಸಭಾ ವ್ಯಾಪಿಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಲೇ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಿವೇಶನಕ್ಕಗಿ ಅರ್ಜಿ ಸಲ್ಲಿಸಿದವರ ಸಂಖ್ಯೆ ೧೦೦೦ ಮೇಲ್ಪಟ್ಟಿದೆ. ಈ ಜನರಿಗೆ ನಿವೇಶನ ನೀಡುವುದು ಜನಪ್ರತಿನಿಧಿ-ಅಧಿಕಾರಿಗಳ ಜವಾಬ್ದಾರಿ. ಈ ಹಿನ್ನಲೆಯಲ್ಲಿ ೯ ಗ್ರಾಪಂ ವ್ಯಾಪ್ತಿಯಲ್ಲಿ ೧೩೫ ಎಕರೆ ಸ್ಥಳ ಖಾದಿರಿಸಲಾಗಿದೆ. ಉಳಿದ ಗ್ರಾಪಂಗಳಲ್ಲಿಯೂ ಸರ್ಕಾರಿ ಜಾಗಗಳನ್ನು ಹುಡುಕು ಕೆಲಸ ಮಾಡಲಾಗುತ್ತಿದೆ. ನಿವೇಶನ ರಹಿತ ಜನರಿಗಾಗಿ ಸುಮಾರು ೨ ಸಾವಿರ ಎಕರೆ ಸ್ಥಳವನ್ನು ನಾವು ಕಾದಿರಿಸಬೇಕು. ಈ ನಿಟ್ಟಿನಲ್ಲಿ ಪೂರ್ವ ತಯಾರಿ ಕೆಲಸಗಳನ್ನು ಮಾಡುವಂತೆ ಅವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರಿ ಕೊಳವೆ ಬಾವಿ ರದ್ದು..
ಈ ಬಾರಿ ಗ್ರಾಪಂಗಳಲ್ಲಿ ಸರ್ಕಾರಿ ಕೊಳವೆ ಬಾವಿಗಳನ್ನು ಕೊರೆಸುವುದನ್ನು ಸರ್ಕಾರ ರದ್ದು ಮಾಡಿದೆ. ಈ ಹಿಂದೆ ತೆಗೆಯಲಾದ ಕೊಳವೆ ಬಾವಿಗಳನ್ನು ಪುನರ್ ವ್ಯವಸ್ಥೆ ಕಲ್ಪಿಸಲು ಅವಕಾಶ ಇದೆ. ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಪುತ್ತೂರು ಸುಳ್ಯ ಬೆಳ್ತಂಗಡಿ ಬಂಟ್ವಾಳ ತಾಲೂಕಿನ ಒಟ್ಟು ೫೬ ಗ್ರಾಪಂಚಾಯತ್ ಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಮುಂದಿನ ಎಪ್ರಿಲ್ ಗೆ ಸಿದ್ಧ
ಬಹುಗ್ರಾಮ ಕುಡಿಯುವ ನೀರು ಯೋಜನೆ ಮುಂದಿನ ಎಪ್ರಿಲ್ ತಿಂಗಳ ಅಂತ್ಯದೊಳಗೆ ವ್ಯವಸ್ಥೆಯಾಗಬೇಕು. ಕುಡಿಯುವ ನೀರು ಒದಗಿಸುವಲ್ಲಿ ಈಗಾಗಲೇ ಗ್ರಾಪಂ ಗಳಲ್ಲಿರುವ ಪೈಪ್ ಲೈನ್ ಗಳನ್ನು ವ್ಯವಸ್ಥಿತಗೊಳಿಸುವ ಕೆಲಸ ನಡೆಯಬೇಕು. ಈ ಬಾರಿ ತಾಲೂಕಿನ ಕೆಲ ಗ್ರಾಪಂ ಗಳಲ್ಲಿ ನೀರಿನ ಸಮಸ್ಯೆ ಫೆಬ್ರವರಿ ತಿಂಗಳಲ್ಲಿಯೇ ಕಂಡುಬAದಿದೆ. ಇದನ್ನು ತಕ್ಷಣ ಸರಿಪಡಿಸಬೇಕು. ಮುಂದಿನ ತಿಂಗಳಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಾರದು. ಅದಕ್ಕೆ ಬೇಕಾದ ತಯಾರಿಗಳನ್ನು ಈಗಲೇ ಮಾಡಿಕೊಳ್ಳಿ. ಪರಿಹರಿಸಲಾರದ ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತನ್ನಿ. ಯಾವುದೇ ವಿಚಾರವನ್ನೂ ನಿರ್ಲಕ್ಷö್ಯ ಮಾಡಿದರೆ ಈ ಸಮಸ್ಯೆಗೆ ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡುತ್ತೇನೆ ಎಂಬ ಎಚ್ಚರಿಕೆಯನ್ನು ಶಾಸಕರು ಅಭಿವೃದ್ಧಿ ಅಧಿಕಾರಿಗಳಿಗೆ ನೀಡಿದರು.
ವೇದಿಕೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ನಗರಸಭಾ ಪೌರಾಯುಕ್ತ ಮಧು ಎಸ್ ಮನೋಹರ್, ವಿಟ್ಲ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕರುಣಾಕರ ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ರವಿಚಂದ್ರ ಯು ಸ್ವಾಗತಿಸಿ ವಂದಿಸಿದರು.
