ಮಿ ರ್ಜಾಪುರ ಜಿಲ್ಲೆಯ ತೆದ್ವಾ ಸಾಹಸಪುರದ ಹನುಮಾನ್ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ಈ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ

ಕಳ್ಳ ದೇವಸ್ಥಾನದಲ್ಲಿನ ವಿಗ್ರಹದ ಮುಂದೆ ಕುಳಿತು 15 ನಿಮಿಷಗಳ ಕಾಲ ಪೂಜೆ ಮಾಡಿ ನಂತರ ಕಿರೀಟವನ್ನು ಕದಿಯುತ್ತಿರುವುದು ವಿಡಿಯೋದಲ್ಲಿ ಕಂಡುಬರುತ್ತದೆ.

ಕಿರೀಟವನ್ನು ಕದಿಯಲು ಅವನು ಒಳಗೆ ಹೋದಾಗ ಅದೇ ಸಮಯದಲ್ಲಿ ಇನ್ನೊಬ್ಬ ವ್ಯಕ್ತಿ ಪೂಜೆಗೆ ಬರುತ್ತಾನೆ. ಈ ಆರೋಪಿಯು ಅಲ್ಲಿಯೇ ತಲೆಬಾಗಿ ಕುಳಿತುಕೊಳ್ಳುತ್ತಾನೆ. ಆ ವ್ಯಕ್ತಿಯು ಹೋದ ಬಳಿಕ ಅವನು ಕಿರೀಟವನ್ನು ಕದ್ದು ತೆಗೆದುಕೊಂಡು ಹೋಗುತ್ತಾನೆ.

https://twitter.com/ManishPDA/status/1873364438306406605?ref_src=twsrc%5Etfw%7Ctwcamp%5Etweetembed%7Ctwterm%5E1873364438306406605%7Ctwgr%5E6b42371421668370827e644bdd41a082a2a2048b%7Ctwcon%5Es1_c10&ref_url=https%3A%2F%2Fapi-news.dailyhunt.in%2F

ಇದರಲ್ಲಿ ಕಳ್ಳನು ಮೊದಲು ಕುಳಿತು ಪ್ರಾರ್ಥಿಸುತ್ತಿರುವುದನ್ನು ಕಾಣಬಹುದು. ಇದಾದ ನಂತರ ವಿಗ್ರಹದ ಬಳಿ ಹೋಗಿ ಹನುಮಂಜಿಯ ಬೆಳ್ಳಿಯ ಕಿರೀಟವನ್ನು ಕದಿಯುತ್ತಾನೆ

ದೇವಸ್ಥಾನದ ಅರ್ಚಕರಾದ ದೀಪಕ್ ಮತ್ತು ಅಶೋಕ್ ದುಬೆ ಅವರು ಶುಕ್ರವಾರ ಪೂಜೆ ಮುಗಿಸಿ ಮನೆಗೆ ಹೋಗಿದ್ದರು , ಮಧ್ಯಾಹ್ನ ದೇವಸ್ಥಾನದ ಬಾಗಿಲು ಮುಚ್ಚಲು ಬಂದಾಗ ಅರ್ಚಕರು ಕಿರೀಟ ಕಾಣೆಯಾದ್ದು ದೇವಾಲಯದ ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದಾಗ ಕಿರೀಟವನ್ನು ಕಳವು ಮಾಡಿರುವುದು ಪತ್ತೆಯಾಗಿದೆ.

ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಳ್ಳನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ವೀಡಿಯೊವನ್ನು @ManishPDA‌ ಎಂಬ ಹೆಸರಿನ ಎಕ್ಸ್‌ ಬಳಕೆದಾರ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!