ಪುತ್ತೂರು: ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಮನೆಯಲ್ಲಿ ಚೇತರಿಸಿಕೊಳ್ಳುತ್ತಿರುವ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿ ಚೇತಕ್ ಅವರಿಗೆ ಸುಮಾರು 20 ಸಾವಿರ ಮೌಲ್ಯದ ವೈದ್ಯಕೀಯ ವಿನ್ಯಾಸದ ಹಾಸ್ಪಿಟಲ್ ಬೆಡ್ ನ್ನು ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ ನ ಸಂಸ್ಥಾಪಕರಾದ ಅರುಣ್ ಕುಮಾ‌ರ್ ಪುತ್ತಿಲ ಹಸ್ತಾಂತರಿಸಿದರು.

ಈ ಬೆಡ್ ಅನ್ನು ಇತ್ತೀಚೆಗೆ ಸ್ವರ್ಗಸ್ಥರಾದ ನೆಹರುನಗರ ಗಣೇಶ್ ಭಾಗ್ ನಿವಾಸಿ ಜಯಂತಿ ಅವರ ಸ್ಮರಣಾರ್ಥ ಅವರ ಪುತ್ರರು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸೇವಾ ಯೋಜನೆಗೆ ಹಸ್ತಾಂತರಿಸಿದ್ದರು.

ಕುಂಜೂರುಪಂಜ ನಿವಾಸಿ ತಿಮ್ಮಪ್ಪ ನಾಯ್ಕ ಅವರ ಪುತ್ರ ಚೇತಕ್ ಅವರಿಗೆ ಬೆಡ್ ಹಸ್ತಾಂತರ ಸಂದರ್ಭದಲ್ಲಿ ದಿವಂಗತ ಜಯಂತಿ ಅವರ ಪುತ್ರ ಉಮೇಶ್‌, ಸೇವಾ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ರವಿ ಕುಮಾ‌ರ್ ರೈ ಕೆದಂಬಾಡಿ ಮಠ ಹಾಗೂ ಹರೀಶ್ ಮರುವಾಳ ಮತ್ತು ಪ್ರಜ್ವಲ್ ಘಾಟೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!