ಪುತ್ತೂರು : ಲೋಕದ ಪಾಪಗಳ ವಿಮೋಚನೆಗಾಗಿ ದೇವಪುತ್ರ ಯೇಸು ಕ್ರಿಸ್ತರು ಶಿಲುಬೆಯ ಮರಣವನ್ನಪ್ಪಿದ ಸ್ಮರಣಾರ್ಥ ಶುಭ ಶುಕ್ರವಾರವನ್ನು (ಗುಡ್ ಫ್ರೈಡೆ) ರಾಜ್ಯಾದ್ಯಂತ ಕ್ರೈಸ್ತ ಬಾಂಧವರು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಿದರು.
ಬೆಳಗ್ಗಿನಿಂದಲೇ ಉಪವಾಸ ವ್ರತ ಕೈಗೊಂಡ ಭಕ್ತರು ನಗರ ಸೇರಿದಂತೆ ವಿವಿಧ ಭಾಗಗಳ ಚರ್ಚ್‌ಗಳಲ್ಲಿ ನಡೆದ ವಿಶೇಷ ಪ್ರಾರ್ಥನಾ ಸಭೆಗಳಲ್ಲಿ ಭಾಗವಹಿಸಿದರು. ಯೇಸು ಕ್ರಿಸ್ತರು ಶಿಲುಬೆಗೆ ಏರುವ ಮುನ್ನ ಅನುಭವಿಸಿದ ಯಾತನೆಗಳನ್ನು ಸ್ಮರಿಸುವ ‘ಶಿಲುಬೆ ಹಾದಿ’ (ವೇ ಆಫ್ ದ ಕ್ರಾಸ್) ಪ್ರಾರ್ಥನೆ ಪ್ರಮುಖ ಚರ್ಚ್‌ಗಳಲ್ಲಿ ಭಕ್ತಿಪೂರ್ವಕವಾಗಿ ನಡೆಯಿತು.
ಈ ಸಂದರ್ಭದಲ್ಲಿ ಯೇಸುವಿನ ಅಂತಿಮ ಏಳು ವಾಕ್ಯಗಳ ಕುರಿತು ಪ್ರವಚನಗಳು ನಡೆದವು. ಶಿಲುಬೆಯ ಆರಾಧನೆ ಹಾಗೂ ಪ್ರಾಯಶ್ಚಿತ್ತ ಪ್ರಾರ್ಥನೆಗಳ ಮೂಲಕ ಭಕ್ತರು ಶಾಂತಿ ಮತ್ತು ಕ್ಷಮೆಯಿಗಾಗಿ ಪ್ರಾರ್ಥಿಸಿದರು.
ನೂರಾರು ಕ್ರೈಸ್ತರು ಪವಿತ್ರ ವಿಧಿವಿಧಾನಗಳಲ್ಲಿ ಪಾಲ್ಗೊಂಡು ಪ್ರಭು ಯೇಸುವಿನ ತ್ಯಾಗವನ್ನು ಸ್ಮರಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!